Follow us:-
ಕಲ್ಯಾಣಪುರ ತ್ರಿಶಾ ಪ.ಪೂ. ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ.
  • By Creative Media Team
  • April 14, 2025
  • No Comments

ಕಲ್ಯಾಣಪುರ ತ್ರಿಶಾ ಪ.ಪೂ. ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ.

ಉಡುಪಿಯ ಕಲ್ಯಾಣಪುರದಲ್ಲಿ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ನಿರ್ಮಾತೃ, ಭಾರತರತ್ನ ಡಾ. ಬಿ. ಆರ್ ಅಂಬೇಡ್ಕರ್ ರವರ 134 ನೇ ಜಯಂತಿಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವದರ ಮೂಲಕ ಆಚರಿಸಲಾಯಿತು.
ಪ್ರಾಂಶುಪಾಲ ರಾಮಕೃಷ್ಣ ಹೆಗಡೆ ಮಾತನಾಡಿ ಜಗತ್ತಿನ ಎಲ್ಲಾ ಸಂವಿಧಾನಗಳಿಗಿAತ ಶ್ರೇಷ್ಠವಾದ ಸಂವಿಧಾನ ಭಾರತ ದೇಶದ್ದಾಗಿದೆ. ಅಂಬೇಡ್ಕರ್ ಅವರು ದೀನದಲಿತರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ನ್ಯಾಯ ನೀಡುವುದಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು. ತನ್ಮೂಲಕ ಬೃಹತ್ ಸಂವಿಧಾನದ ರಚನೆಯಾಗಿ ದೇಶದ ಎಲ್ಲಾ ನಾಗರೀಕರಿಗೂ ಭಯಮುಕ್ತ ಸ್ವಾತಂತ್ರದ ಬದುಕು ಬದುಕಲು ಕಾರಣವಾಯಿತು.
ನಾವು ನಮ್ಮ ದೇಶದ ಪವಿತ್ರವಾದ ಸಂವಿಧಾನದ ಆಶಯಗಳನ್ನು ಗೌರವಿಸಿ, ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಲರಾದ ಜೋಯೆಲ್ ಮನೋಜ್ ಫೆರ್ನಾಂಡಿಸ್, ಉಪನ್ಯಾಸಕ ಮತ್ತು ಉಪನ್ಯಾಸಕೇತರ ಬಳಗದವರು ವಿದ್ಯಾರ್ಥಿಗಳು ಪುಷ್ಪನಮನ ಸಲ್ಲಿಸಿದರು.
ಕನ್ನಡ ಉಪನ್ಯಾಸಕ ಆದರ್ಶ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಹೇಶ್ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

 

Leave a Reply

Your email address will not be published. Required fields are marked *